Slide
Slide
Slide
previous arrow
next arrow

ಭಾಗಶಃ ಸುಟ್ಟ ಶವ ಪತ್ತೆ: ಪ್ರಕರಣ ದಾಖಲು

300x250 AD

ಸಿದ್ದಾಪುರ: ವ್ಯಕ್ತಿಯೋರ್ವನ ಮೃತದೇಹ ಸುಟ್ಟ ಅವಸ್ಥೆಯಲ್ಲಿ ಪತ್ತೆಯಾದ ಘಟನೆ ತಾಲ್ಲೂಕಿನ ವಾಟಗಾರ ರಸ್ತೆಯ ಕುಂಟೆಹೊಳೆ ಸೇತುವೆಯ ಬಳಿ ಮಾ.22ರ ರಾತ್ರಿ  ನಡೆದಿದೆ. 

ತಾಲೂಕಿನ ಇಟಗಿ ಸಮೀಪದ ಜಾಗಣೆ ಮೂಲದ ಪ್ರಸ್ತುತ ಸಂಗೊಳ್ಳಿಮನೆಯಲ್ಲಿ ವಾಸವಿದ್ದ ಗಣೇಶ ಮಾಬ್ಲೇಶ್ವರ ಹೆಗಡೆ (೭೧) ಮೃತಪಟ್ಟ ವ್ಯಕ್ತಿ. ಮೃತನ ಸಹೋದರ ಶ್ರೀಧರ ಮಾಬ್ಲೇಶ್ವರ ಹೆಗಡೆ  ಹಾಗೂ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಂಟೆಹೊಳೆಯ ಸೇತುವೆಯ ಹತ್ತಿರ ಬಂದು ನೋಡಿದಾಗ ಸೇತುವೆಯ ಬಲ ಬದಿಯಲ್ಲಿ ಗಣೇಶ ಹೆಗಡೆ ಅವರ ದೇಹವು ಭಾಗಶಃ ಸುಟ್ಟು, ಅಂಗಾತ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬರುತ್ತಿದ್ದರೂ ಸಾವಿನಲ್ಲಿ ಬಲವಾದ ಸಂಶಯವಿದ್ದು ಈ ಕುರಿತು ತನಿಖೆ ಕೈಗೊಂಡು ಮರಣದ ನೈಜಕಾರಣವನ್ನು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತರ ಸಹೋದರ ದೂರನ್ನು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top